ಪ್ರಕೃತಿ ಮಾತೆನಮೋಸ್ತುತೆ!
ನಮ್ಮ ಸುತ್ತಮುತ್ತಲಿನ ಪರಿಸರ ನಿಜಕ್ಕೂ ಅದ್ಭುತ! ಅದನ್ನು ನೋಡಿದಾಗ ಹೃದಯದಲ್ಲಿ ಶಾಂತಿ ತುಂಬುತ್ತದೆ. ಪ್ರಕೃತಿಯ ಸೊಬಗನ್ನು ವರ್ಣಿಸಲು ಶಬ್ದಗಳೇ ಸಾಲದು. ಪರಿಸರವಿಲ್ಲದೆ ಮನುಷ್ಯನ ಜೀವನವೇ ಅಸಾಧ್ಯ. ಆದ್ದರಿಂದ, ಪರಿಸರವನ್ನು ಸಂರಕ್ಷಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನ ಮಾಡಬೇಕು.
ಒಳ್ಳೆಯ ಪರಿಸರವೆಂದರೆ, ಸ್ವಚ್ಚವಾದ ಗಾಳಿ, ಶುದ್ಧವಾದ ನೀರು, ಹಸಿರಿನಿಂದ ಹೊಳೆಯುವ ಗಿಡಮರಗಳು, ಹಗುರವಾದ ವಾತಾವರಣ, ಹಕ್ಕಿಗಳ ಕೂಗಾಟ—ಇವೆಲ್ಲವೂ ಮನುಷ್ಯನಿಗೆ ಆನಂದ ನೀಡುತ್ತವೆ.
ಆದರೆ, ನಾವು ಮಾಲಿನ್ಯದಿಂದ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ವಾಯು ಮಾಲಿನ್ಯ, ಜಲಮಾಲಿನ್ಯ, ಶಬ್ದ ಮಾಲಿನ್ಯ—ಇವೆಲ್ಲವೂ ಪ್ರಕೃತಿಗೆ ದೊಡ್ಡ ಪಿಡುಗು. ನಗರೀಕರಣದಿಂದಾಗಿ ಗಿಡಮರಗಳು ಕಡಿದು ಹೋಗುತ್ತಿವೆ, ನದಿ-ಕೆರೆಗಳು ಕೊಳಕುಗಳಿಂದ ತುಂಬಿವೆ, ಪ್ರಾಣಿಗಳು ತಮ್ಮ ನೆಲೆ ಕಳೆದುಕೊಂಡಿವೆ..
ದೇವರು ಈ ಸುಂದರ ಭೂಮಿಯನ್ನು ನಮ್ಮ ಉಲ್ಲಾಸಕ್ಕಾಗಿ ನಿರ್ಮಿಸಿದ್ದಾನೆ. ಆದರೆ, ನಾವು ಅದನ್ನು ಕಳೆದುಕೊಂಡರೆ, ನಮ್ಮ ಮುಂದಿನ ಪೀಳಿಗೆಯೇ ನಾಶವಾಗುವ ಸಂಭವವಿದೆ. ಪ್ರಕೃತಿಯ ಕೊಡುಗೆಗಳನ್ನು ನಾವು ಯಥೇಚ್ಛವಾಗಿ ಬಳಸಿಕೊಳ್ಳುತ್ತಿದ್ದೇವೆ—ಆಹಾರ, ನೀರು, ಗಾಳಿ, ಆಶ್ರಯ—ಇವೆಲ್ಲವೂ ಪ್ರಕೃತಿಯೇ ಕೊಟ್ಟ ವರಗಳು. ಆದರೆ ನಾವು ಅವುಗಳ ಹಾಳು ಮಾಡುತ್ತಿದ್ದೇವೆ.
ಇದನ್ನು ತಕ್ಷಣ ನಿಲ್ಲಿಸಬೇಕು! ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಹೇಗೆ?
- ಹೆಚ್ಚು ಹೆಚ್ಚು ಗಿಡಗಳನ್ನು ನೆಡಬೇಕು.
- ವಾಯುಮಾಲಿನ್ಯ ಕಡಿಮೆ ಮಾಡುವ ಪ್ರಯತ್ನ ಮಾಡಬೇಕು.
- ಪ್ಲಾಸ್ಟಿಕ್ ಬಳಕೆಯನ್ನು ತೀವ್ರವಾಗಿ ನಿಯಂತ್ರಿಸಬೇಕು.
- ನೀರಿನ ಮಾಲಿನ್ಯವನ್ನು ತಡೆಯಬೇಕು..
- ಕಾಡುಗಳನ್ನು ಉಳಿಸಿ, ಪ್ರಾಣಿಗಳ ಆಶ್ರಯವನ್ನು ಕಾಪಾಡಬೇಕು.
ಪ್ಲಾಸ್ಟಿಕ್ ಒಂದು ಮಹಾ ವಿಪತ್ತು. ಪ್ರಕೃತಿ ಮಾತೆಯೂ ಇದನ್ನು ತನ್ನ ಮಕ್ಕಳಾಗಿಯೇ ಪೋಷಿಸಿತು, ಆದರೆ ಈ ಪ್ಲಾಸ್ಟಿಕ್ ಆಕೆಯ ಮೇಲೆಯೇ ಹಾನಿ ಉಂಟು ಮಾಡುತ್ತಿದೆ. ನಾವು ಇದನ್ನು ತಕ್ಷಣ ಸಂಹಾರ ಮಾಡಬೇಕು.
ಹಕ್ಕಿಗಳು ಮತ್ತು ಪ್ರಾಣಿಗಳನ್ನು ಕೂಡ ನಾವು ಸಂರಕ್ಷಿಸಬೇಕು. ಮೊಬೈಲ್ ಮತ್ತು ಕಂಪ್ಯೂಟರ್ ತಂತ್ರಜ್ಞಾನದಿಂದ ಬರುವ ಹಾನಿಕಾರಕ ಕಿರಣಗಳು ಹಕ್ಕಿಗಳ ಜೀವಕ್ಕೆ ಅಪಾಯಕಾರಿಯಾಗಿವೆ. ಅವುಗಳನ್ನು ಕಾಪಾಡುವ ಜವಾಬ್ದಾರಿ ನಮ್ಮದೆ. ಇದೇ ರೀತಿ, ಕಾಡುಗಳನ್ನು ನಾಶ ಮಾಡುವುದು ಪ್ರಾಣಿಗಳ ಮನೆ ಕಳೆದುಕೊಳ್ಳಲು ಕಾರಣವಾಗುತ್ತಿದೆ. ಇದರಿಂದ ಜೈವಿಕ ಸಮತೋಲನ ಹಾಳಾಗುತ್ತಿದೆ.
ನೀರು ಮಾಲಿನ್ಯವಾಗುವುದರಿಂದ ಮನುಷ್ಯನು ಕೂಡ ಅದರಿಂದ ನಾಶವಾಗುವ ಸಾಧ್ಯತೆ ಇದೆ. ಅತಿಯಾಗಿ ಮಾಲಿನ್ಯಗೊಂಡ ನೀರನ್ನು ಕುಡಿಯುವ ಮೂಲಕ ಮನುಷ್ಯನು ಅನೇಕ ರೋಗಗಳಿಗೆ ಗುರಿಯಾಗುತ್ತಾನೆ. ಅದನ್ನು ತಪ್ಪಿಸಲು ಕೈಗೊಳ್ಳಬೇಕಾದ ಕ್ರಮಗಳೆಂದರೆ, ಕಾರ್ಖಾನೆಗಳಿಂದ ಬರುವ ಕಸವನ್ನು ನದಿಗಳಿಗೆ ಬಿಡದಂತೆ ತಡೆಯುವುದು, ನೀರನ್ನು ಶುದ್ಧವಾಗಿಡುವುದು.
ಪ್ರಾಣಿಗಳು ಅದೇ ನೀರನ್ನು ನಂಬಿಕೊಂಡು ಬಾಳುತ್ತವೆ. ಆ ನೀರಿಗೆ ತೊಂದರೆ ಆದರೆ ಪ್ರಾಣಿಗಳಿಗೂ ಅಷ್ಟೇ ಅಲ್ಲದೆ ಮನುಷ್ಯನಿಗೂ ಕುಡಿಯಲು ಶುದ್ಧವಾದ ನೀರು ಸಿಗದೇ ರೋಗಕ್ಕೆ ತುತ್ತಾಗಿ ಸಾಯುತ್ತೇವೆ.. ಇದು ಒಳ್ಳೆಯದಲ್ಲ ಆದ್ದರಿಂದ ನಾವು ಇದನ್ನು ನಿಲ್ಲಿಸಬೇಕು. ಅದು ಅಲ್ಲದೆ ಕಾರ್ಖಾನೆಗಳಿಂದ ಬಿಡುವ ಹೊಗೆ, ಮನುಷ್ಯನು ತಯಾರಿಸುತ್ತಿರುವ ವಾಹನಗಳಿಂದ ವಾಯು ಮಾಲಿನ್ಯವಾಗುತ್ತದೆ.ಪರಿಸರ ಏನಾದರೂ ಹೀಗೆ ತೊಂದರೆಗೊಳಾಗುತ್ತಿದ್ದರೆ, ಅದರ ಕೋಪದಿಂದ ನಾವೆಲ್ಲರೂ ನಾಶವಾಗುತ್ತೇವೆ. ಆದ್ದರಿಂದ ನಾವು ಪರಿಸರವನ್ನು ಕಾಪಾಡಬೇಕು.. “ಪ್ರಕೃತಿಯ ಸೌಂದರ್ಯವನ್ನು ಉಳಿಸಬೇಕು ನಮ್ಮೆಲ್ಲರ ತಾಯಿಯನ್ನು ನಾವು ರಕ್ಷಿಸಬೇಕು.
ಪರಿಸರವು ನಾಶವಾಗುವುದರಿಂದ ಪ್ರಕೃತಿಯ ಕೋಪಕ್ಕೂ ನಾವು ಒಳಗಾಗಬಹುದು. ಅದರಿಂದ ಭೂಕಂಪ, ಸುನಾಮಿ, ಭೀಕರ ಪ್ರವಾಹಗಳು ಸಂಭವಿಸಬಹುದು. ಆದ್ದರಿಂದ, ನಾವು ಈಗಲಾದರೂ ಎಚ್ಚರವಾಗಬೇಕು. ಪ್ರಕೃತಿಯ ಸೌಂದರ್ಯವನ್ನು ಉಳಿಸಬೇಕು, ನಮ್ಮ ತಾಯಿಯರನ್ನು ರಕ್ಷಿಸಬೇಕಾಗಿದೆ.
ಪ್ರಕೃತಿಯು ನಮ್ಮ ಗುರು. ಮರಗಳು ಧೈರ್ಯವನ್ನು ಕಲಿಸುತ್ತವೆ—ನಾವು ಅವುಗಳನ್ನು ಕಡಿದರೂ ಅದು ಮತ್ತೆ ಮೊಳಕೆಯೊಡೆಯುತ್ತದೆ. ಅದು ನೆರಳು ನೀಡುತ್ತದೆ, ಆಹಾರವನ್ನು ಕೊಡುತ್ತದೆ. ಇದರಿಂದ ನಮಗೆ ಕಲಿಯಬೇಕಾದ ಪಾಠ: ಸಹಾಯ ಮಾಡುವ ಮನೋಭಾವ, ಪರೋಕ್ಷ ಸೇವೆ, ನಿಸ್ವಾರ್ಥತೆ.
ನಾವು ಈ ಭೂಮಿಯನ್ನು ಮರಳಿಸಲಾಗದು, ಆದರೆ ಅದನ್ನು ಉಳಿಸಬಹುದು. “ಧರ್ಮೋ ರಕ್ಷತಿ ರಕ್ಷಿತಃ” ಎಂಬಂತೆ, ನಾವು ಸಹ “ಪ್ರಕೃತಿ ರಕ್ಷತಿ ರಕ್ಷಿತಃ” ಎನ್ನಬೇಕು. ಪ್ರಕೃತಿಯನ್ನು ನಾವು ಸಂರಕ್ಷಿಸಿದರೆ, ಅದು ನಮ್ಮನ್ನು ಸಂರಕ್ಷಿಸುತ್ತದೆ.
ಆಗಾಗಲೇ, ನಾವೆಲ್ಲರೂ ಭದ್ರವಾಗಿ ಬದುಕಲು, ಭೂಮಿಯನ್ನು ಉಳಿಸೋಣ, ಪರಿಸರವನ್ನು ಕಾಪಾಡೋಣ! ಪ್ರಕೃತಿ ಮಾತೆಗೆ ನಮೋಸ್ತುತೆ!